Saturday, June 12, 2010

ಬಾರೋ ಬಾರೋ ಮಳೆರಾಯ

ಈ ಬಾರಿ ಮಲೆನಾಡಿನಲ್ಲಿ ಮಳೆ ಇನ್ನೂ ಬರದಿರಲು ಗೋಕರ್ಣದ ಪುರೋಹಿತರುಗಳೇ ಕಾರಣ.
ಯಾಕೆಂದರೆ ಅವರು ಸರ್ವಶಕ್ತನಾದ ಮಹಾಬಲೇಶ್ವರನನ್ನು ಪ್ರಾರ್ಥಿಸುವಾಗ ಒಂದು ತಪ್ಪು
ಮಾಡಿದ್ದಾರೆ, ಅದೆಂದರೆ 'ತ್ವಾಂ ಪೂಜಯಾಮಿ ಜಗದೀಶ್ವರಮೇ ಪ್ರಸೀದ' ಎನ್ನುವಲ್ಲಿ
' ತ್ವಾಂ ಪೂಜಯಾಮಿ ಜಗದೀಶ್ವರ -ಮೇ ಪ್ರಸೀದ' ಎಂದು ಬಿಟ್ಟಿದ್ದಾರೆ. ಪಾಪ ಆ ಬೋಳೆ-
ಶಂಕರ ಅಸ್ತು ಎಂದಿರಬೇಕು ದಾರಾಳವಾಗಿ ಮೇ ತಿಂಗಳನ್ನೇ ಕೊಟ್ಟಿದ್ದಾನೆ.