Monday, July 5, 2010

ಬಿ ಜಿ ಎಲ್ ಸ್ವಾಮಿ


ಸ್ವಾಮಿಯವರು ಕನ್ನಡದ ಕೆಲವೇ ಕೆಲವು ಬಹುಮುಖ ಪ್ರತಿಭೆಯ ಲೇಖಕರಲ್ಲಿ ಒಬ್ಬರು.
ಕನ್ನಡದ ದಾರ್ಶನಿಕ ಕವಿ ಗುಂಡಪ್ಪನವರ ಮಗ, ಓದಿದ್ದು ಸಸ್ಯಶಾಸ್ತ್ರವಾದರೂ ಎಲ್ಲ ರೀತಿಯ
ಬರವಣಿಗೆಯಲ್ಲೂ ಕೂಡ ಸಿದ್ಧ ಹಸ್ತರು.


ತಮ್ಮ ಅಪಾರವಾದ ಹಾಸ್ಯದ ಶೈಲಿಯಲ್ಲಿ ಎಲ್ಲಾ ವಿಷಯಗಳನ್ನೂ ತಿಳಿಸುವ ವಿಧ ಬಲು ಸುಂದರ. ಸೂಕ್ಷ್ಮವಾದ ನವಿರು ಹಾಸ್ಯ ಶೈಲಿಯಲ್ಲಿಯೇ ಮನ ಮುಟ್ಟುವಂತೆ ವಿಷಯದ ಜ್ನಾನವನ್ನು ತಿಳಿಸುತ್ತಾರೆ


ತಮಿಳರ ಬಗ್ಗೆ ತಮಿಳುನಾಡಿನಲ್ಲಿ ಪ್ರಾಧ್ಯಾಪಕರಾಗಿದ್ದಾಗಿನ ವಿಷಯಗಳ ಮೆಲೆಯೇ ಬಹುತೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದರೂ ತಪ್ಪಾಗಲಾರದು.

ಅವುಗಳಲ್ಲಿ "ತಮಿಳು ತಲೆಗಳ ನಡುವೆ"ಒಂದು ಮಾಸ್ಟರ್ ಪೀಸ್.

ಸಸ್ಯ ಶಾಸ್ತ್ರದ ಬಗ್ಗೆ ಬರೆದರೂ ಎಲ್ಲರೂ ಓದಲೇ ಬೇಕಾದ ಪುಸ್ತಕ "ಹಸಿರುಹೊನ್ನು"
ತಮ್ಮ ಕಾಲೇಜು ದಿನಗಳ ಸಂದರ್ಭಗಳನ್ನು
"ಪ್ರಾಧ್ಯಾಪಕನ ಪೀಠದಲ್ಲಿ"
"ಕಾಲೇಜು ರಂಗ"
"ಕಾಲೇಜು ತರಂಗ"
ಮುಂತಾದ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ.

ಭಾರತದಲ್ಲಿ ಉಪಯೋಗಿಸುವ ವಿದೇಶಿ ಮೂಲದ ತರಕಾರಿಗಳ ಬಗ್ಗೆ ಬರೆದಿರುವ ಪುಸ್ತಕ
"ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ".

ಇವರು ಕನ್ನಡ ಕಂಡ ಅಪರೂಪದ ಲೇಖಕರು ಎಂಬಲ್ಲಿ ಎರಡು ಮಾತಿಲ್ಲ.....

No comments:

Post a Comment