Monday, July 5, 2010

ದೇವರ ಮರೆತರೂ ಧಾರಾವಾಹಿ ಮರೆಯದಿರಿ

ಯಮಲೋಕದಲ್ಲೋಂದು ದಿನ ಯಮನ ದರ್ಬಾರು ನಡೆಯುತ್ತಿತ್ತು

ಒಬ್ಬ ಅಜ್ಜಿಯ ವಿಚಾರಣೆ ನಡೆಸಿದ ಯಮ ಕೇಳಿದ ಏನಜ್ಜಿ ನಿನ್ನ ಪುಣ್ಯದ ಅಕೌಂಟು ತುಂಬಾ ಖಾಲಿಯಾಗಿದೆಯಲ್ಲಾ ಯಾಕೆ ಎಂದು ಕೇಳಿದ. ಹೂಂ ಎಂದರೂ ಇಲ್ಲ ಹಾಂ ಎಂದರೂ ಅಜ್ಜಿಯ ಮಾತಿಲ್ಲ,
ಕೊನೆಗೊಮ್ಮೆ ಅಜ್ಜಿ ಸಿಟ್ಟಿನಿಂದ ಯಮನಲ್ಲಿ ಕೇಳಿಯೇ ಬಿಟ್ಟಳು ನಿನಗೇನು ದಯೆ ದಾಕ್ಷಿಣ್ಯ ಎನೂ ಇಲ್ವೆ
ಸರಿಯಾಗಿ "ಮನೆಯೊಂದು ಮೋರು ಬಾಗಿಲು" ಬರುವ ಸಮಯಕ್ಕೇ ಬಂದರು ನಿನ್ನ ದೂತರು ಅಂತ.


ಅಯ್ಯೋ ಅಜ್ಜಿ ನೀನು ಧಾರಾವಾಹಿಯಲ್ಲಿ ಜಾಹಿರಾತು ಬಂದಾಗಲಾದರೂ
ದೇವರ ಧ್ಯಾನ ಮಾಡಿದ್ದರೆ ನಿನಗೇಕೆ ಈ ಯಮಲೋಕದ ದರ್ಶನ ಯೋಗ ಬರುತ್ತಿತ್ತು, ಅದೂ ಅಲ್ಲದೇ
ನನ್ನನ್ನೇ ದಬಾಯಿಸುತ್ತೀಯಾ , ಎನ್ನುತ್ತಾ ಈ ಅಜ್ಜಿಯನ್ನು ಕೇವಲ "ಟಿ ವಿ 9" ಬರುವ ಕೋಣೆಯಲ್ಲಿ ಒಂದು
ವರ್ಷ ಕೋಡಿ ಹಾಕಿ ಎಂದು ತೀರ್ಪು ನೀಡಿದ............................

2 comments: